ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ರಕ್ಷಣಾ ಪಡೆಗಳ ಪ್ರಥಮ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ಫ್ಯಾಸಿಸ್ಟರ ಬಾಡಿಗೆ ಸೈನಿಕ (ಮರ್ಸಿನರಿ) ಎಂದು ಫೇಸ್ಬುಕ್ನಲ್ಲಿ ಕರೆದಿದ್ದ ಜಿ ಶಿವರಾಜಭೂಪತಿ ಎಂಬ ವ್ಯಕ್ತಿಯ ವಿರುದ್ಧದ ಎಫ್ಐಆರ್ ಅನ್ನು ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ರದ್ದುಗೊಳಿಸಿದೆ. ಅರ್ಜಿದಾರರ ಕೃತ್ಯದಲ್ಲಿ ಸಂಜ್ಞೇಯ ಅಪರಾದದ ಅಂಶಗಳು ಕಂಡುಬರದಿದ್ದರೂ ಅವರ ನಡೆ ತಮಿಳು ಸಂಸ್ಕೃತಿಗೆ ಅನುಗುಣವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.