<div class="paragraphs"><p>Varavara Rao, Bombay High Court</p></div>

Varavara Rao, Bombay High Court

 
ಸುದ್ದಿಗಳು

ಜಾಮೀನು ಹಾಗೂ ತೆಲಂಗಾಣಕ್ಕೆ ತೆರಳಲು ಅನುಮತಿ ಕೋರಿದ್ದ ವರವರರಾವ್: ‌ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್‌ [ಚುಟುಕು]

Bar & Bench

ತಮಗೆ ಶಾಶ್ವತ ಜಾಮೀನು ನೀಡಬೇಕು ಮತ್ತು ತೆಲಂಗಾಣಕ್ಕೆ ತೆರಳಲು ಅನುಮತಿಸಬೇಕು ಎಂದು ತೆಲುಗು ಕವಿ ಹಾಗೂ ಭೀಮಾ ಕೋರೆಗಾಂವ್ ಪ್ರಕರಣದ ಪ್ರಮುಖ ಆರೋಪಿ ವರವರ ರಾವ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಸೋಮವಾರ ತೀರ್ಪು ಕಾಯ್ದಿರಿಸಿದೆ. ಇದೇ ವೇಳೆ ಎಲ್ಲಾ ಮೂರು ಅರ್ಜಿಗಳ ಅಂತಿಮ ತೀರ್ಪು ಬರುವವರೆಗೆ ರಾವ್‌ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ನ್ಯಾಯಮೂರ್ತಿಗಳಾದ ಸುನಿಲ್ ಶುಕ್ರೆ ಮತ್ತು ಜಿ ಎ ಸನಪ್ ಅವರಿದ್ದ ಪೀಠ ವಿಸ್ತರಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.