A1
A1
ಸುದ್ದಿಗಳು

ಬುರ್ಕಾಪಾಲ್ ನಕ್ಸಲ್ ದಾಳಿ: 121 ಆದಿವಾಸಿಗಳನ್ನು ಖುಲಾಸೆಗೊಳಿಸಿದ ಎನ್ಐಎ ನ್ಯಾಯಾಲಯ

Bar & Bench

ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ 25 ಯೋಧರ ಸಾವಿಗೆ ಕಾರಣವಾದ 2017ರ ಬುರ್ಕಾಪಾಲ್ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ 121 ಆದಿವಾಸಿಗಳನ್ನು ಇತ್ತೀಚೆಗೆ ಖುಲಾಸೆಗೊಳಿಸಿದ ಎನ್‌ಐಎ ನ್ಯಾಯಾಲಯ ಪ್ರಾಸಿಕ್ಯೂಷನ್‌ ವೈಫಲ್ಯಗಳನ್ನು ಎತ್ತಿ ತೋರಿಸಿದೆ.

ಅಪರಾಧದಲ್ಲಿ ಅವರು ಪಾಲ್ಗೊಂಡಿರುವುದನ್ನು, ನಕ್ಸಲರೊಂದಿಗೆ ಸಂಪರ್ಕ ಹೊಂದಿರುವುದನ್ನು ನಿರೂಪಿಸುವಲ್ಲಿ ಅಥವಾ ಅವರಿಂದ ಯಾವುದೇ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವುದರಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾ. ದೀಪಕ್‌ ಕುಮಾರ್‌ ದೇಶ್ಲ್ಹ್ರೆ ಆದೇಶಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಕಾಯಿದೆ, ಸ್ಫೋಟಕ ವಸ್ತುಗಳ ಕಾಯಿದೆ, ಛತ್ತೀಸ್‌ಗಢ ವಿಶೇಷ ಸಾರ್ವಜನಿಕ ಭದ್ರತಾ ಕಾಯಿದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆಗಸ್ಟ್ 2021 ರಲ್ಲಿ ವಿಚಾರಣೆ ಆರಂಭವಾಗಿತ್ತು ಕಳೆದ ವಾರ ಈ ಸಂಬಂಧ ತೀರ್ಪು ನೀಡಲಾಗಿತ್ತು.

ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ:

State_of_Chhattisgarh_vs__Sodi_Linga.pdf
Preview