<div class="paragraphs"><p>(From L to R) Justices Hemant Gupta and V Ramasubramanian</p></div>

(From L to R) Justices Hemant Gupta and V Ramasubramanian

 
A1
ಸುದ್ದಿಗಳು

ತಾಂತ್ರಿಕ ಗುತ್ತಿಗೆ, ಟೆಂಡರ್ ಪ್ರಕರಣಗಳೆಡೆಗೆ ನ್ಯಾಯಾಲಯಗಳು ನಿರಾಸಕ್ತಿ ತೋರಬೇಕು ಎಂದ ಸುಪ್ರೀಂ ಕೋರ್ಟ್‌ [ಚುಟುಕು]

Bar & Bench

ತಾಂತ್ರಿಕ ಸಮಸ್ಯೆಗಳ ಬಗ್ಗೆ ತೀರ್ಪು ನೀಡಲು ಅಗತ್ಯ ಪರಿಣತಿಯ ಅವಶ್ಯಕತೆ ಇರುವುದರಿಂದ ಅಂತಹ ಒಪ್ಪಂದಗಳಲ್ಲಿ ಮಧ್ಯಪ್ರವೇಶಿಸುವುದಕ್ಕೆ ನ್ಯಾಯಾಲಯಗಳು ನಿರಾಸಕ್ತಿ ತೋರಬೇಕು. ತಾಂತ್ರಿಕ ಗುತ್ತಿಗೆ, ಟೆಂಡರ್ ಪ್ರಕರಣಗಳ ಬಗ್ಗೆ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಲು ಹೋಗಬಾರದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಒಳಿತಿಗಾಗಿ ರೂಪುಗೊಂಡ ಸೇವೆ ಮತ್ತು ಯೋಜನೆಗಳನ್ನು ಹಳಿತಪ್ಪಿಸುವಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮಧ್ಯಂತರ ಆದೇಶ ನೀಡಬಾರದು ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಹೇಳಿದೆ.

ಜಾರ್ಖಂಡ್‌ ರಸ್ತೆ ನಿರ್ಮಾಣ ಇಲಾಖೆಯು ನಗರುಂತರಿ-ಧುರ್ಕಿ-ಅಂಬಖೋರಿಯಾ ರಸ್ತೆಯ ಪುನರ್‌ನಿರ್ಮಾಣಕ್ಕಾಗಿ 2019ರಲ್ಲಿ ಟೆಂಡರ್‌ಗಳನ್ನು ಆಹ್ವಾನಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.