<div class="paragraphs"><p>Farmer CJ's of Karnataka HC&nbsp; G T Nanavati and N K Sodhi&nbsp;</p></div>

Farmer CJ's of Karnataka HC  G T Nanavati and N K Sodhi 

 
ಸುದ್ದಿಗಳು

ನಿಧನ ಹೊಂದಿದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ನಾನಾವತಿ, ಸೋಧಿ ಅವರಿಗೆ ಕರ್ನಾಟಕ ಹೈಕೋರ್ಟ್‌ನ ಶ್ರದ್ಧಾಂಜಲಿ

Bar & Bench

ಇತ್ತೀಚೆಗೆ ನಿಧನರಾದ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾಗಿದ್ದ‌ ಜಿ ಟಿ ನಾನಾವತಿ ಮತ್ತು ಎನ್‌ ಕೆ ಸೋಧಿ ಅವರಿಗೆ ಹಾಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದಲ್ಲಿ ಕರ್ನಾಟಕ ಹೈಕೋರ್ಟ್‌ ಗುರುವಾರ ಶ್ರದ್ಧಾಂಜಲಿ ಸಲ್ಲಿಸಿತು.

ಸುಪೀಂ ಕೋರ್ಟ್‌ ನ್ಯಾಯಮೂರ್ತಿಯೂ ಆಗಿದ್ದ ನಾನಾವತಿ ಮತ್ತು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದ ಸೋಧಿ ಅವರ ಗುಣಗಾನವನ್ನು ಈ ವೇಳೆ ಮಾಡಲಾಯಿತು. ಗುಜರಾತ್‌ ಮೂಲದ ನ್ಯಾ. ನಾನಾವತಿ ಅವರು ಕಳೆದ ವರ್ಷದ ಡಿಸೆಂಬರ್‌ 18ರಂದು, ಪಂಜಾಬ್‌ ಮೂಲದ ನ್ಯಾ. ಎನ್‌ ಕೆ ಸೋಧಿ ಅವರು ಡಿಸೆಂಬರ್‌ 28ರಂದು ವಿಧಿವಶರಾಗಿದ್ದರು.

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ, ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌, ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಮೋತಕಪಳ್ಳಿ ಕಾಶಿನಾಥ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಮತ್ತಿತರರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.