Punjab and Haryana High Court, Chandigarh 
ಸುದ್ದಿಗಳು

ರಿಯಲ್‌ ಎಸ್ಟೇಟ್‌: ಅರಾವಳಿಗೆ ಕೊಡಲಿ ಪೆಟ್ಟು ನೀಡಲು ಮುಂದಾದ ಡಿಎಲ್‌ಎಫ್‌, ಪಿಐಎಲ್‌ ದಾಖಲಿಸಿದ ಹರ್ಯಾಣ ಹೈಕೋರ್ಟ್‌

ಡಿಎಲ್‌ಎಫ್ ಸಂಸ್ಥೆಯು ಗುರುಗ್ರಾಮದ ಅರಾವಳಿ ವಲಯದಲ್ಲಿ ರಿಯಲ್ ಎಸ್ಟೇಟ್ ಯೋಜನೆಗಾಗಿ ಸುಮಾರು 2,000 ಮರಗಳನ್ನು ಕಡಿಯುತ್ತಿದೆ ಎಂಬ ವರದಿಯ ಮೇರೆಗೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಿದ ನ್ಯಾಯಾಲಯ.

Bar & Bench

ರಿಯಲ್ ಎಸ್ಟೇಟ್ ಡೆವಲಪರ್ ಡಿಎಲ್‌ಎಫ್ ಸಂಸ್ಥೆಯು ಗುರುಗ್ರಾಮದ ಅರಾವಳಿ ವಲಯದಲ್ಲಿ ರಿಯಲ್ ಎಸ್ಟೇಟ್ ಯೋಜನೆಗಾಗಿ ಸುಮಾರು 2,000 ಮರಗಳನ್ನು ಕಡಿಯುತ್ತಿದೆ ಎಂಬ ವರದಿಯ ಮೇರೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗುರುವಾರ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಪ್ರಾರಂಭಿಸಿದೆ [ನ್ಯಾಯಾಲಯವು ಅದರ ಮೋಷನ್ ವಿರುದ್ಧ ಹರಿಯಾಣ ರಾಜ್ಯ].

ನ್ಯಾಯಮೂರ್ತಿಗಳಾದದ ಅನಿಲ್ ಕ್ಷೇತ್ರಪಾಲ್‌ ಮತ್ತು ಅಮನ್ ಚೌಧರಿ ಅವರ ಪೀಠವು ಹರಿಯಾಣ ಸರ್ಕಾರ, ಗುರುಗ್ರಾಮ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಡಿಎಲ್‌ಎಫ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿದೆ.

"ಈ ವಿಷಯವನ್ನು ಗುರುಗ್ರಾಮ್ ಮುನ್ಸಿಪಲ್ ಕಾರ್ಪೊರೇಷನ್‌ಗೆ ತಿಳಿಸಲು ಸೂಚಿಸಲಾಗಿದೆ. ಒಂದು ವಾರದೊಳಗೆ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ರಾಜ್ಯ ವಕೀಲರಿಗೆ ನಿರ್ದೇಶಿಸಲಾಗಿದೆ" ಎಂದು ಪೀಠವು ಆದೇಶಿಸಿತು. ಜೂನ್ 26 ರಂದು ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ, ರಾಜ್ಯವನ್ನು ಪ್ರತಿನಿಧಿಸಿದ್ದ ವಕೀಲರು ರಿಯಲ್ ಎಸ್ಟೇಟ್ ಯೋಜನೆಯನ್ನು ಪ್ರಸ್ತಾಪಿಸಲಾದ ಪ್ರದೇಶವು ಪುರಸಭೆಯ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು. "ಯಾವುದೇ ಅನುಮತಿಯನ್ನು [ಎಂಸಿ] ನೀಡಬೇಕು" ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಜೂನ್ 12 ರಂದು ʼದ ಟ್ರಿಬ್ಯೂನ್ʼ ಪ್ರಕಟಿಸಿದ ವರದಿಯ ಪ್ರಕಾರ, ಗುರುಗ್ರಾಮದ ಡಿಎಲ್‌ಎಫ್ ಹಂತ 5 ರಲ್ಲಿ 40 ಎಕರೆ ಭೂಮಿಯಲ್ಲಿನ ಮರಗಳನ್ನು ಕಡಿಯಲು ಯೋಚಿಸಲಾಗಿದೆ. ಸ್ಥಳೀಯ ನಿವಾಸಿಗಳು ಮತ್ತು ಪರಿಸರ ಕಾರ್ಯಕರ್ತರು ಡಿಎಲ್‌ಎಫ್‌ ನಿರ್ಮಾಣ ಸಂಸ್ಥೆಯು "ಅರಾವಳಿಯನ್ನು ನಾಶಪಡಿಸುತ್ತಿದೆ" ಎಂದು ಆರೋಪಿಸಿದ್ದಾರೆ.

ಪತ್ರಿಕೆಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ದಕ್ಷಿಣ ಹರಿಯಾಣದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಯಾದವ್ ಅವರು ಈ ಭೂಮಿ ಡಿಎಲ್‌ಎಫ್‌ಗೆ ಸೇರಿದ್ದು ಇದರಲ್ಲಿ ಯಾವುದೇ ಅರಣ್ಯ ಪ್ರದೇಶ ಒಳಗೊಂಡಿಲ್ಲ. ಹಾಗಾಗಿ, ಇದರ ಮೇಲೆ ತನ್ನ ಅಧಿಕಾರ ವ್ಯಾಪ್ತಿ ಇಲ್ಲ ಎಂದಿದೆ.