Kiran Bedi
Kiran Bedi  Facebook
ಸುದ್ದಿಗಳು

ದೀಕ್ಷಿತ್ ಆಶ್ರಮದ ಅವ್ಯವಹಾರ ತನಿಖೆ: ಸಮಿತಿ ಮೇಲ್ವಿಚಾರಣೆಗೆ ಕಿರಣ್ ಬೇಡಿ ನೇಮಿಸಿದ ದೆಹಲಿ ಹೈಕೋರ್ಟ್ [ಚುಟುಕು]

Bar & Bench

ಮಹಿಳೆಯರನ್ನು ಪಶುಸದೃಶವಾಗಿ ನಡೆಸಿಕೊಳ್ಳುತ್ತಿದ್ದ ತಲೆಮರೆಸಿಕೊಂಡಿರುವ ಸ್ವಘೋಷಿತ ದೇವಮಾನವ ವೀರೇಂದ್ರ ದೇವ್ ದೀಕ್ಷಿತ್ ಅವರ ದೆಹಲಿ ಆಶ್ರಮದ ಅವ್ಯವಹಾರಗಳ ತನಿಖೆಗಾಗಿ ತಾನು ರಚಿಸಿರುವ ಸಮಿತಿ ಮೇಲ್ವಿಚಾರಣೆಗೆ ನಿವೃತ್ತ ಐಪಿಎಸ್‌ ಅಧಿಕಾರಿ, ಮಾಜಿ ರಾಜ್ಯಪಾಲೆ ಕಿರಣ್ ಬೇಡಿ ಅವರನ್ನು ನೇಮಕ ಮಾಡಿ ದೆಹಲಿ ಹೈಕೋರ್ಟ್‌ ಆದೇಶಿಸಿದೆ.

ಆಶ್ರಮದಲ್ಲಿ ಯಾವುದೇ ಮಹಿಳೆ ಅಥವಾ ಮಗು ತನ್ನ ಮೂಲಭೂತ ಇಲ್ಲವೇ ಇತರ ಕಾನೂನು ಹಕ್ಕುಗಳಿಗೆ ತುತ್ತಾಗದಂತೆ ನೋಡಿಕೊಳ್ಳುವ ಸಲುವಾಗಿ ಸಮಿತಿ ರಚಿಸಲಾಗುತ್ತಿದೆ. ಸಮಿತಿಯ ಸದಸ್ಯರು ಆಶ್ರಮ ಪ್ರವೇಶಿಸಲು ಅನುವು ಮಾಡಿಕೊಡಬೇಕು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಪೀಠ ತಿಳಿಸಿದೆ. ಮೇ 27ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.