ಎಲ್ಐಸಿ ಐಪಿಒಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ

ಆದರೂ ರಿಟ್ ಅರ್ಜಿ ವಿಲೇವಾರಿ ಮಾಡುವವರೆಗೆ ಎಲ್ಐಸಿ ನಡೆಸುವ ಯಾವುದೇ ಸಾರ್ವಜನಿಕ ಸಮಸ್ಯೆ ಅರ್ಜಿಯಲ್ಲಿನ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಎಲ್ಐಸಿ ಐಪಿಒಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ
A1

ಹೂಡಿಕೆದಾರರಿಗೆ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ (ಐಪಿಒ) ಒದಗಿಸುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ. [ಚಾರುದತ್ತ್ ಚಾಂಗ್‌ಡಿಯೋ ಪವಾರ್ ಇನ್ನಿತರರು ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].

ಎಲ್‌ಐಸಿ ನೀಡಲಿರುವ ಸಾರ್ವಜನಿಕ ಕೊಡುಗೆ ಮತ್ತು ಷೇರುಗಳ ವಿತರಣೆ ಪ್ರಶ್ನಿಸಿ ಮೂವರು ಪಾಲಿಸಿದಾರರು ಸಲ್ಲಿಸಿದ ಮನವಿ ಕುರಿತಂತೆ ಈ ಆದೇಶ ಬಂದಿದೆ. ಇದು ಎಲ್ಐಸಿ ಕಾಯಿದೆಗೆ ತಿದ್ದುಪಡಿ ಮಾಡಲು ಬಯಸಿದ ಹಣಕಾಸು ಕಾಯಿದೆಯ ಭಾಗವೊಂದನ್ನು ಪ್ರಶ್ನಿಸಿತ್ತು. ಡಿಆರ್‌ಎಚ್‌ಪಿಗೆ ತಡೆ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಮಾಧವ್ ಜಾಮ್ದಾರ್ ಅವರಿದ್ದ ಪೀಠ ತಿರಸ್ಕರಿಸಿತು.

ಆದರೂ ರಿಟ್ ಅರ್ಜಿ ವಿಲೇವಾರಿ ಮಾಡುವವರೆಗೆ ಎಲ್‌ಐಸಿ ನಡೆಸುವ ಯಾವುದೇ ಸಾರ್ವಜನಿಕ ಸಮಸ್ಯೆ ಅರ್ಜಿಯಲ್ಲಿನ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Also Read
ವಾಹನ ಕಳ್ಳತನದ ಬಗ್ಗೆ ತಡವಾಗಿ ಮಾಹಿತಿ ನೀಡಿದ್ದಾರೆಂದು ವಿಮಾ ಕಂಪೆನಿ ಪರಿಹಾರ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರವು ಐಪಿಒ ಮೂಲಕ ಕಂಪನಿಯಲ್ಲಿ ತನ್ನ ಪಾಲನ್ನು 5% ಹಿಂತೆಗೆದುಕೊಳ್ಳಲು ಯೋಜಿಸುತ್ತಿದೆ. ನಿವ್ವಳ ಸಂಚಿಕೆಯಲ್ಲಿ 50%ರಷ್ಟನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಕಾಯ್ದಿರಿಸಲಾಗಿದ್ದು ವರದಿಗಳ ಪ್ರಕಾರ ಸಾಂಸ್ಥಿಕವಲ್ಲದ ಖರೀದಿದಾರರು 15% ಷೇರುಗಳ ಹಂಚಿಕೆಯನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಅರ್ಜಿ ಎರಡು ಆಕ್ಷೇಪಗಳನ್ನು ಎತ್ತಿತ್ತು:

  • ಹಣಕಾಸು ಕಾಯಿದೆ 2021ರ ಪೂರ್ವ ಸೂಚಕವಾಗಿರುವ ಹಣಕಾಸು ಮಸೂದೆಯನ್ನು ಸಂವಿಧಾನದ 110 ನೇ ವಿಧಿಯ ಅಡಿಯಲ್ಲಿ ಹಣದ ಮಸೂದೆಯಾಗಿ ಎಂದಿಗೂ ಅಂಗೀಕರಿಸಲಾಗುವುದಿಲ್ಲ.

  • ಹಣಕಾಸು ಕಾಯಿದೆ ಮತ್ತು ನಿರ್ದಿಷ್ಟವಾಗಿ LIC ಕಾಯಿದೆಗೆ ಪರಿಚಯಿಸಿದ ತಿದ್ದುಪಡಿಗಳು ಸಂವಿಧಾನದ 300A ವಿಧಿಗೆ ತೀವ್ರ ರೀತಿಯಲ್ಲಿ ವ್ಯತಿರಿಕ್ತವಾಗಿವೆ.

ಆದರೆ ಎಲ್‌ಐಸಿ ನಿಧಿಯ ಹೆಚ್ಚುವರಿ ಮೊತ್ತದಲ್ಲಿ ಪಾಲಿಸಿದಾರರು ಪಾಲು ಹೊಂದುವವುದು ನ್ಯಾಯಾಲಯಕ್ಕೆ ಒಪ್ಪಿಗೆಯಾಗಲಿಲ್ಲ. “ಸಂವಿಧಾನದ 300-ಎ ವಿಧಿ ಪ್ರಕಾರ ಎಲ್ಐಸಿ ನಿಧಿಯ ಹೆಚ್ಚುವರಿ ಅಥವಾ ಯಾವುದೇ ಭಾಗವು ಪಾಲಿಸಿದಾರರ ‘ಆಸ್ತಿʼಎಂದು ಹೇಗೆ ಹೇಳಬಹುದು ಎಂಬುದನ್ನು ನಾವು ಗಮನಿಸುತ್ತಿಲ್ಲ. ಡಿವಿಡೆಂಡ್ ಅಥವಾ ಬೋನಸ್ ಅಥವಾ ಕೆಲವು ರೀತಿಯ ಪಾವತಿಯನ್ನು ಸ್ವೀಕರಿಸಲು ಒಬ್ಬ ವ್ಯಕ್ತಿಗೆ ಅರ್ಹತೆ ಇದೆ ಎಂದು ಹೇಳುವುದು ಒಂದು ವಿಷಯವಾಗಿರಬಹುದು. ವ್ಯಕ್ತಿಯು ನಿಧಿಯಲ್ಲಿಯೇ ನಿರ್ದಿಷ್ಟ ಆಸಕ್ತಿಯನ್ನು ಹೊಂದಿದ್ದಾನೆ ಎಂದು ಹೇಳುವುದಕ್ಕಿಂತ ಇದು ಕಲ್ಪನಾತ್ಮಕವಾಗಿ ತುಂಬಾ ಭಿನ್ನವಾಗಿರಬಹುದು" ಎಂದು ತರ್ಕಿಸಿತು.

Related Stories

No stories found.
Kannada Bar & Bench
kannada.barandbench.com