ಮೂವರು ನ್ಯಾಯಾಂಗ ಅಧಿಕಾರಿಗಳನ್ನು ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಿದ ಕೇಂದ್ರ ಸರ್ಕಾರ

ನ್ಯಾ. ರಾಜೇಶ್ವರಿ ನಾರಾಯಣ ಹೆಗಡೆ ಅವರು ತಾವು ಪ್ರಮಾಣ ಸ್ವೀಕರಿಸಿದಾಗಿನಿಂದ 17.03.2028ರಂದು ನಿವೃತ್ತರಾಗುವವರೆಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿರಲಿದ್ದಾರೆ.
Karnataka High Court
Karnataka High Court
Published on

ಮೂವರು ನ್ಯಾಯಾಂಗ ಅಧಿಕಾರಿಗಳನ್ನು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಪ್ರಕಟಿಸಿದೆ.

ನ್ಯಾ. ರಾಜೇಶ್ವರಿ ನಾರಾಯಣ ಹೆಗಡೆ ಅವರು ತಾವು ಪ್ರಮಾಣ ಸ್ವೀಕರಿಸಿದಾಗಿನಿಂದ 17.03.2028ರಂದು ನಿವೃತ್ತರಾಗುವವರೆಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿರಲಿದ್ದಾರೆ. ಉಳಿದಂತೆ ನ್ಯಾಯಮೂರ್ತಿಗಳಾದ ಕೆ ಶಾಂತಿ ಗಣೇಶ್‌ ಮತ್ತು ಬೃಂಗೇಶ್‌ ಮಹದೇವಪ್ಪ ಅವರನ್ನು ಎರಡು ವರ್ಷಗಳ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಮುಖ್ಯ ನ್ಯಾಯಮೂರ್ತಿಯೂ ಸೇರಿದಂತೆ ಸದ್ಯ 45 ನ್ಯಾಯಮೂರ್ತಿಗಳಿದ್ದಾರೆ. 17 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ.

Attachment
PDF
Notification of Additional Judges, Karnataka HC
Preview
Kannada Bar & Bench
kannada.barandbench.com