ಕಲ್ಲಿದ್ದಲು ಹಗರಣದ ಅರ್ಜಿದಾರ ಹಾಗೂ ನಿರ್ಭಯಾ ಅಪರಾಧಿ ಪರ ವಕೀಲ ಎಂಎಲ್ ಶರ್ಮಾ ಇನ್ನಿಲ್ಲ

ರಫೇಲ್ ಒಪ್ಪಂದ, ಹಿಂಡೆನ್‌ಬರ್ಗ್‌ ವರದಿ, ಪೆಗಸಸ್ ಗೂಢಚರ್ಯೆ ಹಗರಣ, ಬಿಬಿಸಿ ಸಾಕ್ಷ್ಯಚಿತ್ರ, 370ನೇ ವಿಧಿ ರದ್ದತಿ, 2008 ರ ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಮುಂತಾದ ಪ್ರಕರಣಗಳ ಬಗ್ಗೆಯೂ ಅವರು ಪಿಐಎಲ್ ಸಲ್ಲಿಸಿದ್ದರು.
ML Sharma
ML Sharma
Published on

ಕಲ್ಲಿದ್ದಲು ಹಗರಣದ ಪ್ರಮುಖ ಅರ್ಜಿದಾರರಾದ ವಕೀಲ ಮನೋಹರ್ ಲಾಲ್ ಶರ್ಮಾ ಡಿಸೆಂಬರ್ 19ರಂದು ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಶರ್ಮಾ ಅವರು ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಪ್ರಕರಣ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲು ಹೆಸರುವಾಸಿಯಾಗಿದ್ದರು.

Also Read
ಕ್ಷುಲ್ಲಕ ಪಿಐಎಲ್‌ಗಳ ಕುರಿತಂತೆ ಸುಪ್ರೀಂ ಕೋರ್ಟ್ 2022ರಲ್ಲಿ ವ್ಯವಹರಿಸಿದ್ದು ಹೇಗೆ ಗೊತ್ತೆ?

ರಫೇಲ್ ಒಪ್ಪಂದ, ಹಿಂಡೆನ್‌ಬರ್ಗ್ ವರದಿ, ಪೆಗಸಸ್ ಗೂಢಚರ್ಯೆ ಹಗರಣ, ಬಿಬಿಸಿ ಸಾಕ್ಷ್ಯಚಿತ್ರ, 370ನೇ ವಿಧಿ ರದ್ದತಿ, 2008 ರ ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಮುಂತಾದ ಪ್ರಕರಣಗಳ ಬಗ್ಗೆಯೂ ಅವರು ಪಿಐಎಲ್ ಸಲ್ಲಿಸಿದ್ದರು.

2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರ ಪರ ಅವರು ವಕೀಲರಾಗಿದ್ದರು .

ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸುವುದಕ್ಕಾಗಿ ಶರ್ಮಾ ಆಗಾಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಕೆಂಗಣ್ಣಿಗೂ ಗುರಿಯಾಗುತ್ತಿದ್ದರು.

Also Read
ಅನಗತ್ಯ, ಕ್ಷುಲ್ಲಕ ವ್ಯಾಜ್ಯ ನಿಯಂತ್ರಿಸದಿದ್ದರೆ ದಂಡ ವಿಧಿಸಲಾಗುವುದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಎಚ್ಚರಿಕೆ

2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಾ ಮಹಿಳೆಯರ ಬಗ್ಗೆ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು.

ಅಂತೆಯೇ ಸುಪ್ರೀಂ ಕೋರ್ಟ್ ಮಹಿಳಾ ವಕೀಲರ ಸಂಘ ಅವರು ಸುಪ್ರೀಂ ಕೋರ್ಟ್‌ಗೆ ಹಾಜರಾಗದಂತೆ ತಡೆ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿತ್ತು.

Kannada Bar & Bench
kannada.barandbench.com