ಬೆಂಗಳೂರು ವಕೀಲರ ಅಕಾಡೆಮಿಗೆ 10 ಎಕರೆ ಜಮೀನಿನ ಭರವಸೆ: ಅಡ್ವೊಕೇಟ್‌ ಜನರಲ್‌

“ಕೋರ್ಟ್‌ನಲ್ಲಿ ಕ್ರೋಧಭರಿತರಾಗಿ ಆಕ್ರಮಣಕಾರಿ ಶೈಲಿಯಲ್ಲಿ ವಾದ ಮಂಡಿಸುವುದು ಬಹಳ ಸುಲಭ. ಆದರೆ, ಶಾಂತಚಿತ್ತರಾಗಿ ಸಹನೆಯಿಂದ ವಾದ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ” ಎಂದ ನ್ಯಾ.ಓಕಾ.
ಬೆಂಗಳೂರು ವಕೀಲರ ಅಕಾಡೆಮಿಗೆ 10 ಎಕರೆ ಜಮೀನಿನ ಭರವಸೆ: ಅಡ್ವೊಕೇಟ್‌ ಜನರಲ್‌
Published on

ಬೆಂಗಳೂರು ವಕೀಲರ ಅಕಾಡೆಮಿಯ ಕಾರ್ಯ ಚಟುವಟಿಕೆಗಳಿಗೆ ಅನುವಾಗುವಂತೆ 10 ಎಕರೆ ಜಮೀನು ಒದಗಿಸಲು ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಕೊಡುವ ಭರವಸೆಯನ್ನು ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ ಅವರು “ರಾಷ್ಟ್ರವೇ ಹೆಮ್ಮೆಪಡುವಂತಹ ವ್ಯಕ್ತಿತ್ವ ನ್ಯಾಯಮೂರ್ತಿ ಓಕಾ ಅವರದ್ದು” ಎಂದು ಪ್ರಶಂಸಿಸಿದರು.

ಅಭಿನಂದನೆ ಸ್ವೀಕರಿಸಿ, ಬೆಂಗಳೂರು ವಕೀಲರ ಅಕಾಡೆಮಿ ಹಮ್ಮಿಕೊಂಡಿದ್ದ “ವೃತ್ತಿ ರೂಪಿಸಿಕೊಳ್ಳಲು ಯುವ ವಕೀಲರಿಗೆ ಅಗತ್ಯವಾಗಿರಬೇಕಾದ ನೈತಿಕತೆ, ಪ್ರತಿಭೆ ಮತ್ತು ಗುಣಗಳು” ವಿಚಾರದ ಕುರಿತ ಆರಂಭಿಕ ಉಪನ್ಯಾಸ ನೀಡಿದ ನ್ಯಾ. ಓಕಾ ಅವರು ಅವರು “ಯುವ ವಕೀಲರು ಸಾಂಪ್ರದಾಯಿಕ ಶೈಲಿಯಲ್ಲಿ ಪಾರದರ್ಶಕ ನಡವಳಿಕೆ ರೂಢಿಸಿಕೊಳ್ಳಬೇಕು ಮತ್ತು ಶಿಸ್ತುಬದ್ಧ ವಕೀಲಿಕೆಯಿಂದ ಯಶಸ್ಸು ಗಳಿಸಲು ಸಾಧ್ಯ” ಎಂದರು.

“ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ಹಿತಾಸಕ್ತಿ ಹೊಂದಿದ ಪ್ರಕರಣಗಳಲ್ಲಿ ಆಸಕ್ತರಾಗಿ ವೃತ್ತಿ ಕೌಶಲ್ಯ ರೂಢಿಸಿಕೊಳ್ಳಬೇಕು. ಕೋರ್ಟ್‌ ಹಾಲ್‌ನಲ್ಲಿ ಕ್ರೋಧಭರಿತರಾಗಿ ಆಕ್ರಮಣಕಾರಿ ಶೈಲಿಯಲ್ಲಿ ವಾದ ಮಂಡಿಸುವುದು ಬಹಳ ಸುಲಭ. ಆದರೆ, ಶಾಂತಚಿತ್ತರಾಗಿ ಸಹನೆಯಿಂದ ವಾದ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ” ಎಂದು ಕಿವಿಮಾತು ಹೇಳಿದರು.

ನ್ಯಾಯಮೂರ್ತಿ ಅನು ಶಿವರಾಮನ್‌, ಅಕಾಡೆಮಿ ಅಧ್ಯಕ್ಷ ಡಿ ಎಲ್‌ ಜಗದೀಶ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ನ್ಯಾಯಮೂರ್ತಿಗಳು ಸಂಘದ ಪದಾಧಿಕಾರಿಗಳು ಇದ್ದರು.

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎ ಎಸ್‌ ಓಕಾ ಅವರನ್ನು ಅಭಿನಂದಿಸಲಾಯಿತು. ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾದ ಕೆ ಚಂದ್ರಕಾಂತ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಚ್‌ ವಿ ಪ್ರವೀಣ್‌ ಗೌಡ, ಸಂಘದ ಉಪಾಧ್ಯಕ್ಷ ಸಿ ಎಸ್‌ ಗಿರೀಶ್‌ ಕುಮಾರ್, ಬೆಂಗಳೂರು ವಕೀಳರ ಅಕಾಡೆಮಿ ಅಧ್ಯಕ್ಷರೂ ಆದ ಹಿರಿಯ ವಕೀಲ ಡಿ ಎಲ್‌ ಜಗದೀಶ್‌ ಮತ್ತಿತರರು ಇದ್ದರು.

Kannada Bar & Bench
kannada.barandbench.com