ಐಪಿಎಸ್, ಐಎಫ್ಎಸ್‌ಗಿಂತಲೂ ಶ್ರೇಷ್ಠರೆಂದು ಬಿಂಬಿಸಿಕೊಳ್ಳಲು ಐಎಎಸ್ ಅಧಿಕಾರಿಗಳು ಸದಾ ಬಯಸುತ್ತಾರೆ: ಸುಪ್ರೀಂ

ಈ ಸಂಘರ್ಷ ಎಲ್ಲಾ ರಾಜ್ಯಗಳಲ್ಲೂ ಇದ್ದು ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಲ್ಲಿ ಈ ಬಗ್ಗೆ ಈರ್ಷ್ಯೆ ಇದೆ ಎಂದಿದೆ ಪೀಠ.
Supreme Court
Supreme Court
Published on

ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿಗಳ ನಡುವೆ ನಡೆಯುತ್ತಿರುವ ಅಹಮಿಕೆಯ ಸಂಘರ್ಷವನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಸ್ತಾಪಿಸಿದೆ.

ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗಿಂತಲೂ ತಾವು ಶ್ರೇಷ್ಠರು ಎಂದು ಬಿಂಬಿಸಿಕೊಳ್ಳಲು ಐಎಎಸ್ ಅಧಿಕಾರಿಗಳು ಸದಾ ಬಯಸುತ್ತಾರೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ತಿಳಿಸಿತು.

Also Read
ರೂಪಾ ವಿರುದ್ಧದ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವ ಇಚ್ಛೆ ಇಲ್ಲ: ಸುಪ್ರೀಂಗೆ ತಿಳಿಸಿದ ಸಿಂಧೂರಿ

"ಐಎಎಸ್ ಅಧಿಕಾರಿ ಯಾವಾಗಲೂ ಐಪಿಎಸ್ ಅಥವಾ ಐಎಫ್ಎಸ್ ಅಧಿಕಾರಿಗಳ ಮೇಲೆ ತಮ್ಮ ಪ್ರಾಬಲ್ಯ ತೋರಿಸಲು ಬಯಸುತ್ತಾರೆ. ಸರ್ಕಾರಿ ವಕೀಲ ಮತ್ತು ನ್ಯಾಯಾಧೀಶನಾಗಿ ನನಗೆ ಇದರ ಅನುಭವ ಇದೆ. ಈ ಸಂಘರ್ಷ ಎಲ್ಲಾ ರಾಜ್ಯಗಳಲ್ಲಿಯೂ ಇದ್ದು ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಲ್ಲಿ 'ತಾವು ಒಂದೇ ಕೇಡರ್‌ನವರಾಗಿದ್ದರೂ ಐಎಎಸ್ ಅಧಿಕಾರಿಗಳು ಹೇಳುವ ಮಾತನ್ನು ಏಕೆ ಕೇಳಬೇಕು' ಎಂಬ ಬಗ್ಗೆ ಈರ್ಷೆ ಇದೆ" ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

Also Read
ವಕೀಲ ಮುದ್ದಣ್ಣ ಶೆಟ್ಟಿ ವಿರುದ್ಧ ಆಕ್ಷೇಪಾರ್ಹ ವರ್ತನೆ: ಕ್ಷಮಾಪಣೆ ಕೋರಲು ಐಎಎಸ್‌ ಅಧಿಕಾರಿ ಚಾರುಲತಾಗೆ ನಿರ್ದೇಶನ

ಪರಿಸರಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ಪೀಠ ಅರಣ್ಯ ಅಧಿಕಾರಿಗಳು ತಮ್ಮ ಆದೇಶ ಪಾಲಿಸಬೇಕೆಂದು ಐಎಎಸ್ ಅಧಿಕಾರಿಗಳು ತಾಕೀತು ಮಾಡುವ ವಿಚಾರವಾಗಿ ಈ ಮಾತುಗಳನ್ನು ಹೇಳಿತು.

ಅಧಿಕಾರಿಗಳ ನಡುವಿನ ಇಂತಹ ಆಂತರಿಕ ಸಂಘರ್ಷಗಳನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಭರವಸೆ ನೀಡಿದರು.

Kannada Bar & Bench
kannada.barandbench.com