Javed Akhtar, Kangana Ranaut
ಗೀತರಚನೆಕಾರ ಜಾವೇದ್ ಅಖ್ತರ್ ಹಾಗೂ ತಮ್ಮ ನಡುವಿನ ವಿಚಾರಣೆಯನ್ನು ಅಂಧೇರಿ ಮ್ಯಾಜಿಸ್ಟ್ರೇಟ್ ಅವರಿಂದ ಮತ್ತೊಬ್ಬರು ಮ್ಯಾಜಿಸ್ಟ್ರೇಟ್ ಅವರ ಮುಂದೆ ವರ್ಗಾಯಿಸಲು ಕೋರಿ ಬಾಲಿವುಡ್ ನಟಿ ಕಂಗನಾ ರನೌತ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಮುಂಬೈನ ಸೆಷನ್ಸ್ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶ್ರೀಧರ್ ಭೋಸಲೆ ಅವರು ಈ ಸಂಬಂಧ ತೀರ್ಪು ಪ್ರಕಟಿಸಿದರು. ಒಂದು ಅರ್ಜಿ ಕಂಗನಾ ವಿರುದ್ಧ ಅಖ್ತರ್ ದಾಖಲಿಸಿದ್ದ ಮಾನನಷ್ಟ ದೂರನ್ನು ವರ್ಗಾಯಿಸುವಂತೆ ಕೋರಿದ್ದರೆ, ಮತ್ತೊಂದು ಅರ್ಜಿಯಲ್ಲಿ ಅಖ್ತರ್ ತಮ್ಮನ್ನು ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾದ ದೂರನ್ನು ವರ್ಗಾಯಿಸಲು ಕಂಗನಾ ಕೋರಿದ್ದರು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.