ಮುಲ್ಲಪೆರಿಯಾರ್ ಅಣೆಕಟ್ಟು ಬಲಪಡಿಸುವ ಪ್ರಯತ್ನಗಳನ್ನು ಕೇರಳ ವಿಫಲಗೊಳಿಸುತ್ತಿದೆ: ಸುಪ್ರೀಂಗೆ ತಮಿಳುನಾಡು ಮಾಹಿತಿ

ಮುಲ್ಲಪೆರಿಯಾರ್ ಅಣೆಕಟ್ಟು ಸುರಕ್ಷಿತವಾಗಿದ್ದು ಕೇಂದ್ರ ಜಲ ಆಯೋಗವು ಹೇಳಿರುವಂತೆ ಅದನ್ನು ಹೊಸದಾಗಿ ಪರಿಶೀಲಿಸಬೇಕಾದ ಅಗತ್ಯವಿಲ್ಲ. ಅಣೆಕಟ್ಟಿನಲ್ಲಿ ಯಾವುದೇ ನ್ಯೂನತೆಯಾಗಲಿ, ಅಸಹಜತೆಯಾಗಲಿ ಇಲ್ಲ ಎಂದು ತಿಳಿಸಿದ ತಮಿಳುನಾಡು ಸರ್ಕಾರ.
Mullaperiyar dam and Supreme Court

Mullaperiyar dam and Supreme Court

ಮುಲ್ಲಪೆರಿಯಾರ್ ಅಣೆಕಟ್ಟನ್ನು ಬಲಪಡಿಸುವ ತನ್ನ ಪ್ರಯತ್ನಗಳನ್ನು ಕೇರಳ ರಾಜ್ಯವು ವಿಫಲಗೊಳಿಸುತ್ತಿದೆ ಎಂದು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಡಾ. ಜೋ ಜೋಸೆಫ್‌ ವರ್ಸಸ್‌ ತಮಿಳುನಾಡು ಸರ್ಕಾರ].

ಬಹುಮುಖ್ಯವಾಗಿ ತಮಿಳುನಾಡು ಸರ್ಕಾರವು, "ಮುಲ್ಲಪೆರಿಯಾರ್ ಅಣೆಕಟ್ಟು ಸುರಕ್ಷಿತವಾಗಿದ್ದು ಕೇಂದ್ರ ಜಲ ಆಯೋಗವು ಹೇಳಿರುವಂತೆ ಅದನ್ನು ಹೊಸದಾಗಿ ಪರಿಶೀಲಿಸಬೇಕಾದ ಅಗತ್ಯವಿಲ್ಲ ಎಂದಿದೆ. ಅಣೆಕಟ್ಟಿನಲ್ಲಿ ಯಾವುದೇ ನ್ಯೂನತೆಯಾಗಲಿ, ಅಸಹಜತೆಯಾಗಲಿ ಇಲ್ಲ. ಇನ್ನು ಅಣೆಕಟ್ಟಿನಲ್ಲಿ ತುಂಬಿರುವ ಹೂಳು ಸಹ ಮಿತಪ್ರಮಾಣದಲ್ಲಿಯೇ ಇದೆ. ಈ ಜಲವರ್ಷದಲ್ಲಿ +142 ಅಡಿ ನೀರನ್ನು ಸುಮಾರು 18 ದಿನಗಳ ಕಾಲ ಶೇಖರಿಸಲಾಗಿತ್ತು. ಅಣೆಕಟ್ಟಿನ ಎಲ್ಲ ಮಾನದಂಡಗಳು ನಿಗದಿತ ಪರಿಮಿತಿಯಲ್ಲಿವೆ" ಎಂದು ತನ್ನ ಪ್ರತಿಕ್ರಿಯೆಯಲ್ಲಿ ತಮಿಳುನಾಡು ತಿಳಿಸಿದೆ.

ಹಾಗಾಗಿ, ಕೇಂದ್ರ ಜಲ ಆಯೋಗ/ಮೇಲುಸ್ತವಾರಿ ಸಮಿತಿ ಅಥವಾ ಅದರ ಅಂಗಗಳು ಅಣೆಕಟ್ಟಿನ ಸುರಕ್ಷತೆಯ ತಪಾಸಣೆಯನ್ನು ಸುಪ್ರೀಂ ಕೋರ್ಟ್‌ ಈ ಹಿಂದೆ 2006 ಹಾಗೂ 2014ರಲ್ಲಿ ಅಣೆಕಟ್ಟಿನ ಸುರಕ್ಷತೆಗಾಗಿ ಸೂಚಿಸಿದ್ದ ಬಾಕಿ ಕೆಲಸಗಳು ಪೂರ್ಣಗೊಂಡ ನಂತರವಷ್ಟೇ ನಡೆಸಲು ಸೂಚಿಸಬೇಕು ಎಂದು ಕೋರಿದೆ.

ಹೆಚ್ಚಿನ ವಿವರಗಳಿಗೆ 'ಬಾರ್‌ ಅಂಡ್‌ ಬೆಂಚ್‌' ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com