[ಚುಟುಕು] ತನ್ನ ಆದೇಶ ಪಾಲಿಸದ ಬಿಹಾರದ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನಾ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್‌

Supreme Court

Supreme Court

ಕೆಲ ನಿರ್ದಿಷ್ಟ ಪಿಂಚಣಿದಾರರಿಗೆ ನಿವೃತ್ತಿ ಸೌಲಭ್ಯ ಕಲ್ಪಿಸಲು ಸೂಚಿಸಿದ್ದ ತನ್ನ ಆದೇಶವನ್ನು ಪಾಲಿಸುವಲ್ಲಿ ವಿಫಲವಾದ ಬಿಹಾರ ಸರ್ಕಾರದ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನ್ಯಾಯಾಂಗ ನಿಂದನಾ ನೋಟಿಸ್‌ ಜಾರಿ ಮಾಡಿದೆ [ಬಿಜಯ್‌ ಕುಮಾರ್ ಸಿನ್ಹ ಮತ್ತು ಇತರರು ವರ್ಸಸ್‌ ತ್ರಿಪುರಾರಿ ಶರಣ್‌ ಮತ್ತು ಇತರರು]. ನ್ಯಾ. ಎಲ್‌ ನಾಗೇಶ್ವರರಾವ್‌ ಹಾಗೂ ನ್ಯಾ. ಬಿ ಆರ್‌ ಗವಾಯಿ ಅವರಿದ್ದ ವಿಭಾಗೀಯ ಪೀಠವು ಈ ಅಧಿಕಾರಿಗಳಿಗೆ ಫೆ. 22ಕ್ಕೆ ಹಾಜರಾಗಲು ಸೂಚಿಸಿದ್ದು ತಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಅಡಿ ಶಿಕ್ಷಿಸಬಾರದು ಎಂದು ವಿವರಿಸುವಂತೆ ನಿರ್ದೇಶಿಸಿದೆ. ‌

ಹೆಚ್ಚಿನ ವಿವರಗಳಿಗೆ ಬಾರ್‌ ಅಂಡ್ ಬೆಂಚ್‌ ಆಂಗ್ಲ ತಾಣದ ಲಿಂಕ್‌ ಕ್ಲಿಕ್ಕಿಸಿ.

Related Stories

No stories found.
Kannada Bar & Bench
kannada.barandbench.com