<div class="paragraphs"><p>Supreme Court, Motor Accident</p></div>

Supreme Court, Motor Accident

 
ಸುದ್ದಿಗಳು

ಅಪಘಾತ ಪರಿಹಾರ ನಿರ್ಧರಿಸಲು ಪರಿಹಾರ ಕೋರಿದವರ ಅಪಘಾತಾನಂತರದ ಸ್ಥಿತಿ ಅತ್ಯಗತ್ಯ ಅಂಶ: ಸುಪ್ರೀಂ ಕೋರ್ಟ್

Bar & Bench

ಮೋಟಾರು ಅಪಘಾತ ಪರಿಹಾರದಲ್ಲಿ ನೋವು, ಯಾತನೆ, ಕಳೆದುಕೊಂಡ ಸವಲತ್ತು ಹಾಗೂ ಖುಷಿ ಇತ್ಯಾದಿಗಳ ಅಡಿ ನೀಡಬೇಕಾದ ಪರಿಹಾರದ ಮೊತ್ತವನ್ನು ಏಕಸೂತ್ರದ ಆಧಾರದಲ್ಲಿ ಲೆಕ್ಕ ಹಾಕಲಾಗದು ಎಂಬುದಾಗಿ ಸುಪ್ರೀಂ ಕೋಟ್‌ ಶುಕ್ರವಾರ ಹೇಳಿದೆ [ಶ್ರೀ ಬೆನ್ಸನ್ ಜಾರ್ಜ್ ಮತ್ತು ರಿಲಯನ್ಸ್ ಜನರಲ್ ವಿಮಾ ಕಂಪನಿ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].

ಅಪಘಾತಕ್ಕೆ ನೀಡುವ ಪರಿಹಾರ ಎಂಬುದು ಪರಿಹಾರ ಪಡೆಯುವವರ ಅಪಘಾತಾನಂತರದ ಸ್ಥಿತಿಯನ್ನೂ ಕೂಡ ಅವಲಂಬಿಸಿರುತ್ತದೆ. ಪರಿಹಾರ ಕೋರಿದವರು ಅನುಭವಿಸಿದ ನೋವು, ಸಂಕಟ ಆಘಾತವನ್ನು ಹಣದ ಪರಿಭಾಷೆಯಲ್ಲಿ ಸರಿದೂಗಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಅಪಘಾತವೊಂದರಲ್ಲಿ 29 ವರ್ಷದ ವ್ಯಕ್ತಿಯೊಬ್ಬರ ಮೆದುಳಿಗೆ ಗಾಯವಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಕೋಮಾಸ್ಥಿತಿಯಲ್ಲೇ ಉಳಿದರು. ಮೋಟರು ಅಪಘಾತ ಪರಿಹಾರ ನ್ಯಾಯಮಂಡಳಿ ಅಪಘಾತಕ್ಕೀಡಾದ ವ್ಯಕ್ತಿಗೆ ₹94,37,300 ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ ಸೂಚಿಸಿತು.

ಆದರೆ ಇದನ್ನು ಪ್ರಶ್ನಿಸಿ ಪರಿಹಾರ ಕೋರಿದವರು ಮತ್ತು ವಿಮಾ ಕಂಪೆನಿ ಎರಡೂ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದವು. ಪರಿಹಾರ ಮೊತ್ತವನ್ನು ₹1,24,94,333ಗೆ ಹೆಚ್ಚಿಸಿ ನ್ಯಾಯಾಲಯ ಆದೇಶ ಹೊರಡಿಸಿತು. ಆದರೆ ಇನ್ನೂ ಹೆಚ್ಚಿನ ಪರಿಹಾರ ಅಗತ್ಯವಿದೆ ಎಂದು ಪರಿಹಾರ ಕೋರಿದವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮನವಿಯನ್ನು ಭಾಗಶಃ ಅಂಗೀಕರಿಸಿದ ನ್ಯಾಯಾಲಯ ಪರಿಹಾರ ಮೊತ್ತವನ್ನು ವಾರ್ಷಿಕ ಶೇ 6ರಷ್ಟು ಬಡ್ಡಿದರದೊಂದಿಗೆ ₹1,41,94,333ಕ್ಕೆ ಹೆಚ್ಚಿಸಿದೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Sri_Benson_George_v__Reliance_General_Insurance_Company_Limited_and_Another.pdf
Preview