ಕೋವಿಡ್: ಪೋಷಕರು ಶುಲ್ಕ ಕಟ್ಟದ ಕಾರಣಕ್ಕೆ ವಿದ್ಯಾರ್ಥಿಗಳ ಒಂದು ವರ್ಷ ನಷ್ಟವಾಗಬಾರದು ಎಂದ ಕೊಲ್ಕತ್ತಾ ಹೈಕೋರ್ಟ್

ಸಮಯಕ್ಕೆ ಸರಿಯಾಗಿ ಬೋಧನಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಬೋರ್ಡ್ ಪರೀಕ್ಷೆ ಬರೆಯಲು ನಿರ್ಧರಿಸಿದ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಭರವಸೆ ನೀಡಿದೆ.
ಕಲ್ಕತ್ತಾ ಹೈಕೋರ್ಟ್
ಕಲ್ಕತ್ತಾ ಹೈಕೋರ್ಟ್

ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಪೋಷಕರಿಗೆ ನೀಡಲಿರುವ ರಿಯಾಯ್ತಿ ಕುರಿತು ಶಾಲೆಗಳು ಖಚಿತಪಡಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಶಾಲೆಗಳಿಗೆ ಸೂಚಿಸಿದೆ.

ಕೋವಿಡ್- 19 ಸಾಂಕ್ರಾಮಿಕ ರೋಗದ ನಡುವೆಯೇ ಪಶ್ಚಿಮ ಬಂಗಾಳದ ಖಾಸಗಿ ಅನುದಾನರಹಿತ ಶಾಲೆಗಳು ಶಾಲಾ ಶುಲ್ಕ ಸಂಗ್ರಹಿಸುವ ಕುರಿತಾಗಿ ವಿನೀತ್ ರುಯಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

Also Read
ಕೋವಿಡ್: ಆನ್‌ಲೈನ್ ಪರೀಕ್ಷೆಗಳು ಅಸಮಂಜಸವಲ್ಲ, ವಿದ್ಯಾರ್ಥಿಗಳ ಹಿತದೃಷ್ಟಿಗೆ ವಿರುದ್ಧವಲ್ಲ ಎಂದ ಹೈಕೋರ್ಟ್
Also Read
ಪುನರ್ವಸತಿ ಯೋಜನೆ ವೈಫಲ್ಯಕ್ಕೆ ಕೊರೊನಾ ನೆಪ ಹೇಳುವಂತಿಲ್ಲ: ಕರ್ನಾಟಕ ಹೈಕೋರ್ಟ್ ಸಿಡಿಮಿಡಿ

ನ್ಯಾಯಮೂರ್ತಿಗಳಾದ ಸಂಜೀಬ್ ಬ್ಯಾನರ್ಜಿ ಮತ್ತು ಮೌಶುಮಿ ಭಟ್ಟಾಚಾರ್ಯ ಅವರಿದ್ದ ನ್ಯಾಯಪೀಠ ಸಾಮಾನ್ಯ ರೀತಿಯ ರಿಯಾಯ್ತಿಗಳನ್ನು ಸೂಚಿಸಿದ್ದ 12 ಶಾಲೆಗಳಿಗೆ ನಿರ್ದಿಷ್ಟ ರಿಯಾಯ್ತಿ ನೀಡುವಂತೆ ನಿರ್ದೇಶಿಸಿತು.

ಪೋಷಕರು ಶುಲ್ಕ ಕಟ್ಟದ ಕಾರಣಕ್ಕೆ ಯಾವೊಬ್ಬ ವಿದ್ಯಾರ್ಥಿಯನ್ನೂ ಪರೀಕ್ಷೆ ಬರೆಯದಂತೆ ತಡೆಯುವಂತಿಲ್ಲ ಎಂದು ಕೋರ್ಟ್ ಭರವಸೆ ನೀಡಿತು.

"... ಸಾಂಕ್ರಾಮಿಕ ರೋಗದ ನಂತರ ಉದ್ಭವಿಸಿರುವ ಆರ್ಥಿಕ ಪರಿಸ್ಥಿತಿಯಿಂದಾಗಿ ಪೋಷಕರು ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಯಾವುದೇ ವಿದ್ಯಾರ್ಥಿಯ ಒಂದು ವರ್ಷದ ವಿದ್ಯಾಭ್ಯಾಸ ನಷ್ಟವಾಗಬಾರದು.”

ಕಲ್ಕತ್ತಾ ಹೈಕೋರ್ಟ್

ವಿಚಾರಣೆಯನ್ನು ಸೆ. 24ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com