ಕೇರಳ ಸಿಪಿಎಂ ನಾಯಕನ ಪುತ್ರ ಬಿನೀಶ್ ಕೊಡಿಯೇರಿ ಜಾಮೀನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಇ ಡಿ

ಸಿಪಿಎಂನ ಕೇರಳ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರನಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
Bineesh Kodiyeri and Supreme Court
Bineesh Kodiyeri and Supreme Court The New Indian Express

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಅವರಿಗೆ ಕರ್ನಾಟಕ ಹೈಕೋರ್ಟ್ 2021ರ ಅಕ್ಟೋಬರ್‌ನಲ್ಲಿ ನೀಡಿದ್ದ ಜಾಮೀನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ ಡಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪ್ರಕರಣ ಗಂಭೀರ ಆರ್ಥಿಕ ಅಪರಾಧವನ್ನು ಒಳಗೊಂಡಿರುವ ಕಾರಣ ಜಾಮೀನು ಅರ್ಜಿಯನ್ನು ಪರಿಗಣಿಸುವಲ್ಲಿ ಹೈಕೋರ್ಟ್ ತಪ್ಪೆಸಗಿದೆ ಎಂದು ವಕೀಲ ಎಂ ಕೆ ಮರೋರಿಯಾ ಅವರ ಮೂಲಕ ಸಲ್ಲಿಸಲಾದ ವಿಶೇಷ ಅನುಮತಿ ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

Also Read
ಕೊಚ್ಚಿಯಲ್ಲಿ ಕಾನೂನು ಸಂಸ್ಥೆ ಆರಂಭಿಸಿದ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್

ʼಜೈಲಲ್ಲ ಜಾಮೀನುʼ ಎಂಬ ಸಾಮಾನ್ಯ ತತ್ವವನ್ನು ಪ್ರಕರಣದಲ್ಲಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಕೋರಲಾಗಿದೆ. ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಎನ್‌ಸಿಬಿ ಮತ್ತು ಜಾರಿ ನಿರ್ದೇಶನಾಲಯ ಜಂಟಿಯಾಗಿ ಪ್ರಕರಣದ ತನಿಖೆ ನಡೆಸುತ್ತಿವೆ.

ಆಗಸ್ಟ್ 2020 ರಲ್ಲಿ, 60 ಗ್ರಾಂ ಸೈಕೋಆಕ್ಟಿವ್ ಡ್ರಗ್ ಎಂಡಿಎಂಎ ಹೊಂದಿದ್ದಕ್ಕಾಗಿ ಹಲವಾರು ವ್ಯಕ್ತಿಗಳನ್ನು ಬೆಂಗಳೂರಿನಲ್ಲಿ ಎನ್‌ಸಿಬಿ ಬಂಧಿಸಿದ ನಂತರ, ಆರೋಪಿಗಳಲ್ಲಿ ಒಬ್ಬರಾದ ಮೊಹಮ್ಮದ್ ಅನೂಪ್ ಅವರನ್ನು ಇಡಿ ಬಂಧಿಸಿತು.

Also Read
ಹವಾಲಾ ಹಣ ಪ್ರಕರಣ: ಕೇರಳ ಎಡ ಪಕ್ಷದ ನಾಯಕನ ಪುತ್ರ ಬಿನೇಶ್‌ ಕೊಡಿಯೇರಿಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್‌

ಕಳೆದ ವರ್ಷದ ಆಗಸ್ಟ್‌ನಲ್ಲಿ ಬೆಂಗಳೂರಿನ ಮಾದವಸ್ತು ನಿಯಂತ್ರಣ ಸಂಸ್ಥೆಯ ಅಧಿಕಾರಿಗಳು 60 ಗ್ರಾಂ ಎಂಡಿಎಂಎ ಹೊಂದಿದ್ದ ಹಲವರನ್ನು ಬಂಧಿಸಿದ್ದರು. ಈ ಪೈಕಿ ಮೊಹಮ್ಮದ್‌ ಅನೂಪ್‌ನನ್ನು ಜಾರಿ ನಿರ್ದೇಶಾಲಯ ವಶಕ್ಕೆ ಪಡೆದಿತ್ತು.

ಬಿನೇಶ್‌ ಅವರ ರೆಸ್ಟೋರೆಂಟ್‌ಗೆ ಬೇನಾಮಿದಾರ್‌ ಆಗಿ ನೇಮಕವಾಗಿದ್ದು, ತಮ್ಮ ಬಾಸ್‌ ಆಗಿದ್ದ ಬಿನೇಶ್‌ ಹೇಳಿದ್ದನ್ನು ಮಾಡುತ್ತಿದ್ದಾಗಿ ಅನೂಪ್‌ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದರು.ವಿಚಾರಣೆಯ ಸಮಯದಲ್ಲಿ, ಬಿನೀಷ್ ಇಡಿ ಅಧಿಕಾರಿಗಳಿಗೆ ಅನೂಪ್ ಅವರ ಪರಿಚಯವಿದೆ ಆದರೆ ರೆಸ್ಟೋರೆಂಟ್ ತೆರೆಯಲು ಮಾತ್ರ ಹಣವನ್ನು ನೀಡಿದ್ದೇನೆ ಎಂದು ಹೇಳಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಹಲವು ಬ್ಯಾಂಕ್‌ ಖಾತೆಗಳು ಪತ್ತೆಯಾಗಿದ್ದು, ಕೆಲವು ಅನೂಪ್‌ ಹೆಸರಿನಲ್ಲೂ ಇದ್ದವು. ಇವುಗಳಿಗೆ ಬಿನೇಶ್‌ ಅವರು ಅಪಾರ ಪ್ರಮಾಣದ ಹಣವನ್ನು ವರ್ಗಾವಣೆ ಮಾಡಿದ್ದರು. ಇದು ಕ್ರಿಮಿನಲ್‌ ಚಟುವಟಿಕೆಗಳಿಗೆ ಕಾರಣವಾಗಿತ್ತು ಎಂದು ಆಪಾದಿಸಲಾಗಿತ್ತು.

ಕಾನೂನುಬಾಹಿರ ಹಣ ವರ್ಗಾವಣೆ ನಿಯಂತ್ರಣ ಕಾಯಿದೆಯ ಸೆಕ್ಷನ್‌ 3ರ ಅಡಿ ಬಿನೇಶ್‌ ಅಪರಾಧಿ ಎಂಬುದನ್ನು ಸಾಬೀತುಪಡಿಸುವ ಸಂಬಂಧ ಸಾಕ್ಷ್ಯ ಸಂಗ್ರಹಿಸುವ ನಿಟ್ಟಿನಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಜಾರಿ ನಿರ್ದೇಶನಾಲಯ ವಾದಿಸಿತ್ತು. ಆನಂತರ, ಬಂಧನಕ್ಕೆ ಒಳಗಾಗಿದ್ದ ಬಿನೇಶ್‌ ಅವರು ಸುಮಾರು ಒಂದು ವರ್ಷದಿಂದ ಜೈಲಿನಲ್ಲಿದ್ದರು. ಇದಾದ ಕೆಲವೇ ದಿನಗಳಲ್ಲಿ ಬಿನೀಶ್‌ ಅವರನ್ನು ಬಂಧಿಸಲಾಗಿತ್ತು.

ಕರ್ನಾಟಕ ಹೈಕೋರ್ಟ್‌ ಜಾಮೀನು ನೀಡಿದ ಬಳಿಕ ವಕೀಲರೂ ಆಗಿರುವ ಬಿನೀಶ್ ಅವರು ಮತ್ತಿಬ್ಬರು ವಕೀಲರೊಂದಿಗೆ ಕೊಚ್ಚಿಯಲ್ಲಿ ಕಾನೂನು ಸಂಸ್ಥೆ ಆರಂಭಿಸಿದ್ದರು.

Related Stories

No stories found.
Kannada Bar & Bench
kannada.barandbench.com