[ಚುಟುಕು] ರೈಲು ನಿಲ್ದಾಣಕ್ಕೆ ಮರು ನಾಮಕರಣ ಆಕ್ಷೇಪಿಸಿ ಪಿಐಎಲ್: ಅರ್ಜಿದಾರರಿಗೆ ₹10 ಸಾವಿರ ದಂಡ

Madhya Pradesh High Court

Madhya Pradesh High Court

Published on

ಮಧ್ಯಪ್ರದೇಶ ಭೋಪಾಲ್‌ನ ಹಬೀಬ್‌ಗಂಜ್‌ ರೈಲು ನಿಲ್ದಾಣಕ್ಕೆ ರಾಣಿ ಕಮಲಾಪತಿ ರೈಲು ನಿಲ್ದಾಣ ಎಂದು ಪುನರ್‌ ನಾಮಕರಣ ಮಾಡಲು ನಿರ್ಧರಿಸಿದ್ದ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಈಚೆಗೆ ಮಧ್ಯಪ್ರದೇಶ ಹೈಕೋರ್ಟ್‌ ವಜಾ ಮಾಡಿದೆ. ಅಲ್ಲದೇ, ಅರ್ಜಿದಾರರಾದ ಅಹ್ಮದ್‌ ಸಯ್ಯದ್‌ ಖುರೇಷಿ ಅವರಿಗೆ ಕ್ಷುಲ್ಲಕ ಮನವಿಯ ಮೂಲಕ ನ್ಯಾಯಾಲಯದ ಸಮಯವನ್ನು ಪೋಲು ಮಾಡಿದ ಕಾರಣಕ್ಕೆ ₹10,000 ದಂಡ ವಿಧಿಸಿದೆ.

ಹೆಚ್ಚಿನ ವಿವರಗಳಿಗೆ ಬಾರ್‌ ಅಂಡ್ ಬೆಂಚ್‌ ಆಂಗ್ಲ ತಾಣದ ಲಿಂಕ್‌ ಕ್ಲಿಕ್ಕಿಸಿ.

Kannada Bar & Bench
kannada.barandbench.com