ಮಹಾಬೋಧಿ ಮಹಾವೀರ ದೇವಾಲಯ ಬೌದ್ಧರಿಗೆ ಹಸ್ತಾಂತರ: ಹೈಕೋರ್ಟ್‌ ಎಡತಾಕಲು ಸೂಚಿಸಿದ ಸುಪ್ರೀಂ ಕೋರ್ಟ್

ಬೌದ್ಧರ ನಂಬಿಕೆ ಮತ್ತು ಧಾರ್ಮಿಕ ಹಕ್ಕುಗಳನ್ನು ಗೌರವಿಸಿ ಅವರಿಗೆ ದೇವಾಲಯ ನಿರ್ವಹಣೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಲೇಖಾತಾಯಿ ನಳಿನಿತಾಯ್ ನಾರಾಯಣರಾವ್ ಕುಂಭಾರೆ ಎಂಬುವವರು ಅರ್ಜಿ ಸಲ್ಲಿಸಿದ್ದರು.
Supreme Court
Supreme Court
Published on

ಪ್ರಸ್ತುತ ಬಿಹಾರ ಸರ್ಕಾರದ ನಿರ್ವಹಣೆಯಲ್ಲಿರುವ ಮಹಾಬೋಧಿ ಮಹಾವೀರ ದೇವಾಲಯವನ್ನು ಬೌದ್ಧರಿಗೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ [ಸುಲೇಖತಾಯಿ ನಳಿನಿತಾಯಿ ನಾರಾಯಣರಾವ್ ಕುಂಭಾರೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ] .

Also Read
ಹಿಂದೂ, ಬೌದ್ಧ, ಇಸ್ಲಾಂ ಧರ್ಮಗಳ ಸಂಗಮ ಜಮ್ಮು ಮತ್ತು ಕಾಶ್ಮೀರ ಎಂದ ಸಿಜೆಐ ರಮಣ: ಬಹುತ್ವ ಉಳಿಸಿಕೊಳ್ಳಲು ಕರೆ

ಸಂವಿಧಾನದ 32ನೇ ವಿಧಿಯಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ನೇರವಾಗಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಲಾಗದು ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ , ಅರ್ಜಿದಾರರಿಗೆ ಪಾಟ್ನಾ ಹೈಕೋರ್ಟ್ ಸಂಪರ್ಕಿಸಲು ಸೂಚಿಸಿ ಮನವಿ ವಜಾಗೊಳಿಸಿತು.

Also Read
ಶಾಲೆಗಳಲ್ಲಿ ಧರ್ಮ ಮತ್ತು ಮತಗಳ ನಡುವಿನ ವ್ಯತ್ಯಾಸ ಕುರಿತು ಪಾಠ: ಸರ್ಕಾರಗಳ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಬೌದ್ಧ ದೇವಾಲಯದ ನಿರ್ವಹಣೆಯನ್ನು1949ರ ಬೋಧ್ ಗಯಾ ದೇವಾಲಯ ಕಾಯಿದೆಗೆ ತಿದ್ದುಪಡಿ ತಂದು ಬೌದ್ಧರ ನಂಬಿಕೆ ಮತ್ತು ಧಾರ್ಮಿಕ ಹಕ್ಕುಗಳನ್ನು ಗೌರವಿಸಿ ಅವರಿಗೆ ದೇವಾಲಯ ನಿರ್ವಹಣೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಲೇಖಾತಾಯಿ ನಳಿನಿತಾಯ್ ನಾರಾಯಣರಾವ್ ಕುಂಭಾರೆ ಎಂಬುವವರು ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com