ಯೆಸ್ ಬ್ಯಾಂಕ್- ಡಿಎಚ್ಎಫ್ಎಲ್ ಹಗರಣ: ವಾಧ್ವಾನ್ ಸಹೋದರರಿಗೆ ಬಾಂಬೆ ಹೈಕೋರ್ಟ್ ಜಾಮೀನು

ತಪ್ಪಿತಸ್ಥರೆಂದು ಸಾಬೀತಾದಾಗ ಸಿಗಬಹುದಾದ ಗರಿಷ್ಠ ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ಸಹೋದರರು ಜೈಲಿನಲ್ಲಿ ಕಳೆದಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಲಾಯಿತು.
DHFL, Bombay High Court
DHFL, Bombay High Court
Published on

ಯೆಸ್ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನ (ಡಿಎಚ್ಎಫ್ಎಲ್) ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ ಸಹೋದರರಿಗೆ ಬಾಂಬೆ ಹೈಕೋರ್ಟ್ ಬುಧವಾರ ಡಿಫಾಲ್ಟ್ ಜಾಮೀನು ನೀಡಿದೆ.

ಸಹೋದರರು 4 ವರ್ಷ 9 ತಿಂಗಳುಗಳಿಂದ ಬಂಧನದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ವಿಚಾರಣೆ ಪ್ರಾರಂಭವಾಗುವ ಸಾಧ್ಯತೆಯಿಲ್ಲ. ವಿಚಾರಣಾಧೀನ ಕೈದಿಯನ್ನು ಇಷ್ಟು ದೀರ್ಘಾವಧಿಯವರೆಗೆ ಬಂಧಿಸಿಡುವುದು ಸಂವಿಧಾನದ 21ನೇ ವಿಧಿ ಒದಗಿಸಿರುವ ತ್ವರಿತ ವಿಚಾರಣೆಯ ಮೂಲಭೂತ ಹಕ್ಕನ್ನು  ಉಲ್ಲಂಘಿಸಿದಂತಾಗುತ್ತದೆ ಎಂದು ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರು ಹೇಳಿದರು.

Also Read
ಡಿಎಚ್‌ಎಫ್‌ಎಲ್‌ ಬ್ಯಾಂಕ್‌ ಸಾಲ ಹಗರಣ: ಕಪಿಲ್‌, ಧೀರಜ್‌ಗೆ ಶಾಸನಬದ್ಧ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ತನಿಖೆಯಲ್ಲಿನ ವಿಳಂಬದೊಂದಿಗೆ ದೀರ್ಘಕಾಲದ ಬಂಧನವು ಈಗಾಗಲೇ ನಿಯತ ಜಾಮೀನಿನ ಮಿತಿಯನ್ನು ಮೀರಿದೆ ಎಂದು ವಾದಿಸಿದ ವಾಧ್ವಾನ್‌ ಸಹೋದರರ ಪರ ವಕೀಲರು,   ಜಾರಿ ನಿರ್ದೇಶನಾಲಯ (ಇಡಿ)  ತನಿಖೆ ಪೂರ್ಣಗೊಳಿಸಿಲ್ಲ, ಹೀಗಾಗಿ ತ್ವರಿತ ವಿಚಾರಣೆಯ ಸಾಂವಿಧಾನಿಕ ಹಕ್ಕನ್ನು ಗೌರವಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಆದರೆ ವಿವಿಧ ಮಧ್ಯಂತರ ಅರ್ಜಿಗಳನ್ನು ಸಲ್ಲಿಸುವ ಮೂಲಕ ಸಹೋದರರು ವಿಳಂಬಕ್ಕೆ ಕಾರಣರಾಗಿದ್ದಾರೆ ಎಂದು ಇ ಡಿ ಪರ ವಕೀಲರು ವಾದಿಸಿದರು. ದೀರ್ಘಾವಧಿಯ ವಿಚಾರಣಾ ಪೂರ್ವ ಬಂಧನ ಪ್ರಕರಣಗಳಲ್ಲಿ ಜಾಮೀನಿಗೆ ಪ್ರಾಶಸ್ತ್ಯ ಅದನ್ನು ನಿರಾಕರಿಸುವಂತಿಲ್ಲ ಎಂಬ ತತ್ವವನ್ನು ನ್ಯಾಯಮೂರ್ತಿಗಳು ಉಲ್ಲೇಖಿಸಿದರು.

ಕಾನೂನಿನಲ್ಲಿ "ಮಾಡಬೇಕು" ಎಂಬ ಪದವು ಆರೋಪಿಯು ಗರಿಷ್ಠ ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಶಿಕ್ಷೆಯನ್ನು ಅನುಭವಿಸಿದ ನಂತರ ಬಿಡುಗಡೆ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ  ಎಂಬ ಸಿಆರ್‌ಪಿಸಿ ಸೆಕ್ಷನ್ 436-A ಯ ವ್ಯಾಖ್ಯಾನವನ್ನು ಪೀಠ ವಿವರಿಸಿತು. ಈ ನಿಬಂಧನೆಯ ಅಡಿಯಲ್ಲಿ ಜಾಮೀನು ನಿರ್ಧರಿಸುವಲ್ಲಿ ಅಪರಾಧದ ಮಹತ್ವ ಆದ್ಯತೆಯ ಅಂಶವಾಗುವುದಿಲ್ಲ ಎಂದು ಅದು ಪುನರುಚ್ಚರಿಸಿತು.

Also Read
ಡಿಎಚ್ಎಫ್ಎಲ್ ಹಗರಣ: ವಾಧ್ವಾನ್‌ ಸಹೋದರರ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

"ವಿಚಾರಣಾಧೀನ ಅಪರಾಧಿ ಗರಿಷ್ಠ ಶಿಕ್ಷೆಯ ಅರ್ಧದಷ್ಟು ದಾಟಿದ ನಂತರ, ಪಿಎಂಎಲ್‌ಎ ಸೆಕ್ಷನ್ 45(1) ರ ಅಡಿಯಲ್ಲಿ ಅವಳಿ ಷರತ್ತುಗಳ ಕಠಿಣತೆ ಅನ್ವಯಿಸುವುದಿಲ್ಲ ಮತ್ತು ಅರ್ಜಿದಾರರು ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹರಾಗಿರುತ್ತಾರೆ" ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಈ ಹಂತದಲ್ಲಿ ಪ್ರಕರಣದ ಅರ್ಹತೆಯನ್ನು ನಮೂದಿಸದೆಯೇ ಅರ್ಜಿದಾರರು ಜಾಮೀನು ಪಡೆಯಲು ಅರ್ಹರು ಎಂದು ಅದು ತೀರ್ಪು ನೀಡಿದೆ.

ಹಿರಿಯ ವಕೀಲ ಅಮಿತ್ ದೇಸಾಯಿ ಮತ್ತವರ ತಂಡ ವಾಧ್ವಾನ್‌ ಸಹೋದರರ ಪರವಾಗಿ ವಾದ ಮಂಡಿಸಿತು. ಇಡಿಯನ್ನು ವಕೀಲರಾದ ಹಿತೇನ್ ವೆನೆಗಾಂವ್ಕರ್, ಆಯುಷ್ ಕೇಡಿಯಾ ಮತ್ತು ದೀಕ್ಷಾ ರಾಮನಾನಿ ಪ್ರತಿನಿಧಿಸಿದ್ದರು. ಸರ್ಕಾರದ ಪರವಾಗಿ ವಕೀಲ ಎಚ್‌ ಜೆ ದೇಧಿಯಾ ವಾದ ಮಂಡಿಸಿದರು.

Kannada Bar & Bench
kannada.barandbench.com