ವರದಕ್ಷಿಣೆ ನಿಷೇಧ ಕಾಯಿದೆ ರದ್ದು ಕೋರಿಕೆ: ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸಂಸತ್ತಿನ ಗಮನಕ್ಕೆ ವಿಚಾರ ತನ್ನಿ ಎಂದು ಅರ್ಜಿದಾರರಿಗೆ ಹೇಳಿದ ನ್ಯಾಯಾಲಯ.
Supreme Court of India
Supreme Court of India
Published on

ವರದಕ್ಷಿಣೆ ನಿಷೇಧ ಕಾಯಿದೆ- 1961ರ ಕೆಲ ಪ್ರಮುಖ ಸೆಕ್ಷನ್‌ಗಳು ಅಸಾಂವಿಧಾನಿಕ ಎಂದು ಘೋಷಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ರೂಪಶ್ರೀ ಸಿಂಗ್‌ ಮತ್ತು ಭಾರತ ಒಕ್ಕೂಟ ಸರ್ಕಾರ ನಡುವಣ ಪ್ರಕರಣ].

ಬದಲಿಗೆ ಈ ವಿಚಾರವನ್ನು ಸಂಸತ್‌ ಗಮನಕ್ಕೆ ತರುವಂತೆ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ತಿಳಿಸಿತು.

Also Read
ವರದಕ್ಷಿಣೆ ಕಿರುಕುಳದಿಂದ ಸತ್ತವರ ಸಂಬಂಧಿಗಳು ಹಿತಾಸಕ್ತಿ ಹೊಂದಿರುವವರು ಎಂದು ಅವರ ಸಾಕ್ಷಿ ತಿರಸ್ಕರಿಸಲಾಗದು: ಸುಪ್ರೀಂ

ಕಾಯಿದೆಯ ಸೆಕ್ಷನ್ 2, 3 ಮತ್ತು 4 ಅನ್ನು ಅರ್ಜಿದಾರೆ ರೂಪಶ್ರೀ ಸಿಂಗ್‌ ಪ್ರಶ್ನಿಸಿದ್ದರು.

ಸೆಕ್ಷನ್ 2 ವರದಕ್ಷಿಣೆಯನ್ನು ವ್ಯಾಖ್ಯಾನಿಸಿದರೆ ಸೆಕ್ಷನ್ 3  ವರದಕ್ಷಿಣೆ ನೀಡುವುದು ಮತ್ತು ತೆಗೆದುಕೊಳ್ಳುವುದಕ್ಕೆ ಶಿಕ್ಷೆ ವಿಧಿಸುತ್ತದೆ. ವರದಕ್ಷಿಣೆ ಬೇಡಿಕೆ ಇಟ್ಟರೆ ಸೆಕ್ಷನ್ 4ರ ಅಡಿ ಅಪರಾಧವಾಗುತ್ತದೆ.

Also Read
ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ: ಆರೋಪಿ ಪಿಎಸ್‌ಐಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

"ಕಾನೂನುಗಳು ಅಮಾನ್ಯವಾಗಿದೆ. ನಾನು ಸಾರ್ವಜನಿಕ ಮನೋಭಾವದಿಂದ ಹೇಳುತ್ತಿರುವೆ" ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.

"ವಜಾ ಮಾಡಲಾಗಿದೆ. ಹೋಗಿ ಸಂಸತ್ತಿಗೆ ತಿಳಿಸಿ" ಎಂದು ಪೀಠ ನುಡಿಯಿತು.

Kannada Bar & Bench
kannada.barandbench.com